ಸುಮಾರು ಎರಡು ವರ್ಷಗಳ ಹಿಂದೆ, ಹೀಗೆ ಸಮಯ ಕಳೆಯಲು ಸಾಮಾಜಿಕ ಜಾಲತಾಣ ಫೇಸ್ಬುಕ್ ನ ಒಂದು ಗ್ರೂಪ್ ನಲ್ಲಿ ಕಾಮೆಂಟ್ ಮಾಡುತ್ತಿದ್ದೆ. ಆಗ ಒಬ್ಬ ವ್ಯಕ್ತಿ ಅಲ್ಲಿ ಒಂದು ಪೋಸ್ಟ್ ಹಾಕಿ ತುಂಬಾ ಜನರ ವಿರೋಧ ಎದುರಿಸುತ್ತಿದ್ದ. ಪೋಸ್ಟ್ ಕೂಡ ವಿವಾದಾತ್ಮಕವಾಗಿತ್ತು. ಆದರೆ ಆತ ಅಲ್ಲಿ ಯಾರಿಗೂ ನೋವಾಗುವ ರೀತಿಯಲ್ಲಿ ಕಾಮೆಂಟ್ ಮಾಡಿರಲಿಲ್ಲ. ಎಲ್ಲರು ಆತನಿಗೆ ಬೈದು ಕಾಮೆಂಟ್ ಮಾಡುತ್ತಿದ್ದರು. ಆತ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದ್ದ (ವಾದ ಮಾಡುತ್ತಿದ್ದ). ಗುಂಪಿಗೆ ಹೊಸ ಸದಸ್ಯನಾದ ಕಾರಣ ಅಲ್ಲಿನ active ಸದಸ್ಯರು ಯಾರೂ ಅವನಿಗೆ ಪರಿಚಯ ಇರಲಿಲ್ಲ. ನನಗೆ ಆತ ಯಾರು ಅಂತ ಗೊತ್ತಿರಲಿಲ್ಲ. ಹೋಗಲಿ ಯಾರೋ ಹೊಸಬ ಇರಬೇಕು ಎಂದು ಸುಮ್ಮನೆ ಕಾಮೆಂಟ್ ಮಾಡಲು ಹೋಗಲಿಲ್ಲ. ಮರುದಿನ ಪುನಃ ಫೇಸ್ಬುಕ್ ಓಪನ್ ಮಾಡಿದಾಗ ಆ ಪೋಸ್ಟ್ ನಲ್ಲಿ ಮತ್ತಷ್ಟು ಕಾಮೆಂಟ್ ಗಳು. ೫-೬ ಸದಸ್ಯರು ಆ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದರು. ಆತ ಬೇಸರಗೊಂಡು ಗುಂಪನ್ನು ಬಿಟ್ಟು ಹೋಗಿದ್ದ. ಆ ವ್ಯಕ್ತಿಯು ನನ್ನ inbox ಗೆ ಮೆಸೇಜ್ ಮಾಡಿದ್ದ. "ನಾವು ಉತ್ತಮ ಗೆಳೆಯರಾಗಿ ಇರೋಣ. ಈ ಗುಂಪಿನ ಸಹವಾಸ ಸಾಕು ನನಗೆ. ನಾನು ಗುಂಪನ್ನು ಬಿಡುತ್ತಿದ್ದೇನೆ. ಬಾಂಧವ್ಯ ಮಾತ್ರ ಸಿಹಿ ಸಿಹಿ ಗೆಳೆಯ" ಎಂದು.
ಆಗ ಅವನು ಯಾರು, ಏನು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಒಂದೇ ಮೆಸೇಜ್ ಮಾಡಿ "ನೋಡಿ ಸರ್. ಫೇಸ್ಬುಕ್ ನಲ್ಲಿ ಇದೆಲ್ಲಾ ಸಾಮಾನ್ಯ. ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಹಿಡಿಸದೇ ಇರಬಹುದು. ನೀವು ಅಷ್ಟಕ್ಕೇ ಬೇಜಾರಾಗಿ ಗುಂಪು ಬಿಡಬೇಡಿ. ದಯವಿಟ್ಟು ಪುನಃ ಬನ್ನಿ" ಎಂದಿದ್ದೆ.
ಅದಕ್ಕೆ ಅವರು "ನಾನು ತೀಕ್ಷ್ಣವಾದಿ. ಗುಂಪಿಗೆ ನಾನು ಮತ್ತೆ ಬರುವುದಿಲ್ಲ. ಆದರೆ ನಮ್ಮ ಸ್ನೇಹ ಹೀಗೆ ಮುಂದುವರೆಯಲಿ. ನನ್ನ ಫೋನ್ ನಂಬರ್ ತಗೋ ಗೆಳೆಯ" ಎಂದರು.
ಆಯಿತು ಬಿಡಿ. ಅಲ್ಲಿಗೆ ಕಥೆ ಮುಗಿಯಿತು ಎಂದುಕೊಂಡು ನಾನು ಅಲ್ಲಿಗೆ ಆ ವಿಷಯ ಬಿಟ್ಟೆ.
ಅದಾಗಿ ಎರಡು ವಾರಗಳ ಬಳಿಕ ಮತ್ತೆ ನನಗೆ ಮೆಸೇಜ್ ಬಂತು "ದೋಸ್ತಾ, ನಾನು ನಿನ್ನನ್ನು ಭೇಟಿ ಆಗಬೇಕು. ನಮ್ಮ ಮನೆಗೆ ಬರಬಹುದಾ?" ಎಂದು. ಮನೆ ವಿಳಾಸವನ್ನು ಕಳಿಸಿದ್ದರು ಅವರು. ಒಂದು ದಿನ ಫೋನ್ ಮಾಡಿಕೊಂಡು ಅವರ ಮನೆಗೆ ಹೋದೆ. ಆ ವ್ಯಕ್ತಿಯನ್ನು ಮಾತನಾಡಿಸುವಾಗ ನನ್ನ ಗಂಟಲು ಕಟ್ಟಿ ಬಂದು ಕಣ್ಣುಗಳು ಮಂಜಾದವು. ಆದರೂ ಹೇಗೋ ಸುಧಾರಿಸಿಕೊಂಡೆ. ಆತ ಸಾಹಿತ್ಯ ಲೋಕದಲ್ಲಿ ಕಳೆದ ೧೫ ವರ್ಷಗಳಿಂದ ಸಾಕಷ್ಟು ಸಾಧನೆ ಮಾಡಿದ್ದ. ತುಂಬಾ ಹೆಸರು ಗಳಿಸಿದ್ದ. ನನಗೆ ಇವೆಲ್ಲಾ ತಿಳಿದಿದ್ದು ಆತನ ಭೇಟಿಯಾದ ಬಳಿಕ. ಆ ವ್ಯಕ್ತಿಯು osteogenesis imperfecta ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಹಾಸಿಗೆಯ ಮೇಲೆಯೇ ಇಡೀ ಜೀವನವನ್ನು ಮಹಾಯಾತನೆಯಲ್ಲಿ ಕಳೆದಿದ್ದ. ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದರೂ ಅವರ ಕಲ್ಪನಾಶಕ್ತಿಯನ್ನು ಕಂಡು ಬೆರಗಾದೆ.
ಅವರು ಹಲವಾರು ಕವನಗಳನ್ನು ಬರೆದಿದ್ದರು. ಅವರು ಬರೆದ ಒಂದು ಪುಸ್ತಕವನ್ನೂ ನನಗೆ ನೀಡಿದರು. ಅಂದಿನಿಂದ ಶುರುವಾದ ಗೆಳೆತನ ಎರಡು ವರ್ಷಗಳ ಬಳಿಕ ಮತ್ತಷ್ಟು ಗಟ್ಟಿಯಾಗಿದೆ. ಫೇಸ್ಬುಕ್ ನಿಂದ ಪರಿಚಯವಾದ ವ್ಯಕ್ತಿ ನನಗೆ ಸ್ವಂತ ಅಣ್ಣನ ಹಾಗೆ ಆಗಿಬಿಟ್ಟ. ಪ್ರತಿ ಸಲ ಊರಿಗೆ ಹೋದಾಗ ಒಮ್ಮೆಯಾದರೂ ಅವರ ಮನೆಗೆ ಹೋಗಿ ಮಾತನಾಡಿಸಿ ಬರುತ್ತೇನೆ. ಅವರಿಗೂ ಖುಷಿ. ನನಗೂ ಖುಷಿ. ಅವರಿಂದ ಜೀವನದಲ್ಲಿ ಸಾಕಷ್ಟು ಕಲಿತಿದ್ದೇನೆ. ಕಲಿಯುತ್ತಲೂ ಇದ್ದೇನೆ. ಕೆಲವೊಮ್ಮೆ ಫೇಸ್ಬುಕ್ ನಿಂದ ಸಜ್ಜನರ ಪರಿಚಯವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ನಮ್ಮ ನಡುವಿನ ಬಾಂಧವ್ಯ ಮಾತ್ರ ಯಾವಾಗಲೂ ಸಿಹಿ ಸಿಹಿ.
ಆಗ ಅವನು ಯಾರು, ಏನು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಒಂದೇ ಮೆಸೇಜ್ ಮಾಡಿ "ನೋಡಿ ಸರ್. ಫೇಸ್ಬುಕ್ ನಲ್ಲಿ ಇದೆಲ್ಲಾ ಸಾಮಾನ್ಯ. ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಹಿಡಿಸದೇ ಇರಬಹುದು. ನೀವು ಅಷ್ಟಕ್ಕೇ ಬೇಜಾರಾಗಿ ಗುಂಪು ಬಿಡಬೇಡಿ. ದಯವಿಟ್ಟು ಪುನಃ ಬನ್ನಿ" ಎಂದಿದ್ದೆ.
ಅದಕ್ಕೆ ಅವರು "ನಾನು ತೀಕ್ಷ್ಣವಾದಿ. ಗುಂಪಿಗೆ ನಾನು ಮತ್ತೆ ಬರುವುದಿಲ್ಲ. ಆದರೆ ನಮ್ಮ ಸ್ನೇಹ ಹೀಗೆ ಮುಂದುವರೆಯಲಿ. ನನ್ನ ಫೋನ್ ನಂಬರ್ ತಗೋ ಗೆಳೆಯ" ಎಂದರು.
ಆಯಿತು ಬಿಡಿ. ಅಲ್ಲಿಗೆ ಕಥೆ ಮುಗಿಯಿತು ಎಂದುಕೊಂಡು ನಾನು ಅಲ್ಲಿಗೆ ಆ ವಿಷಯ ಬಿಟ್ಟೆ.
ಅದಾಗಿ ಎರಡು ವಾರಗಳ ಬಳಿಕ ಮತ್ತೆ ನನಗೆ ಮೆಸೇಜ್ ಬಂತು "ದೋಸ್ತಾ, ನಾನು ನಿನ್ನನ್ನು ಭೇಟಿ ಆಗಬೇಕು. ನಮ್ಮ ಮನೆಗೆ ಬರಬಹುದಾ?" ಎಂದು. ಮನೆ ವಿಳಾಸವನ್ನು ಕಳಿಸಿದ್ದರು ಅವರು. ಒಂದು ದಿನ ಫೋನ್ ಮಾಡಿಕೊಂಡು ಅವರ ಮನೆಗೆ ಹೋದೆ. ಆ ವ್ಯಕ್ತಿಯನ್ನು ಮಾತನಾಡಿಸುವಾಗ ನನ್ನ ಗಂಟಲು ಕಟ್ಟಿ ಬಂದು ಕಣ್ಣುಗಳು ಮಂಜಾದವು. ಆದರೂ ಹೇಗೋ ಸುಧಾರಿಸಿಕೊಂಡೆ. ಆತ ಸಾಹಿತ್ಯ ಲೋಕದಲ್ಲಿ ಕಳೆದ ೧೫ ವರ್ಷಗಳಿಂದ ಸಾಕಷ್ಟು ಸಾಧನೆ ಮಾಡಿದ್ದ. ತುಂಬಾ ಹೆಸರು ಗಳಿಸಿದ್ದ. ನನಗೆ ಇವೆಲ್ಲಾ ತಿಳಿದಿದ್ದು ಆತನ ಭೇಟಿಯಾದ ಬಳಿಕ. ಆ ವ್ಯಕ್ತಿಯು osteogenesis imperfecta ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಹಾಸಿಗೆಯ ಮೇಲೆಯೇ ಇಡೀ ಜೀವನವನ್ನು ಮಹಾಯಾತನೆಯಲ್ಲಿ ಕಳೆದಿದ್ದ. ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದರೂ ಅವರ ಕಲ್ಪನಾಶಕ್ತಿಯನ್ನು ಕಂಡು ಬೆರಗಾದೆ.
ಅವರು ಹಲವಾರು ಕವನಗಳನ್ನು ಬರೆದಿದ್ದರು. ಅವರು ಬರೆದ ಒಂದು ಪುಸ್ತಕವನ್ನೂ ನನಗೆ ನೀಡಿದರು. ಅಂದಿನಿಂದ ಶುರುವಾದ ಗೆಳೆತನ ಎರಡು ವರ್ಷಗಳ ಬಳಿಕ ಮತ್ತಷ್ಟು ಗಟ್ಟಿಯಾಗಿದೆ. ಫೇಸ್ಬುಕ್ ನಿಂದ ಪರಿಚಯವಾದ ವ್ಯಕ್ತಿ ನನಗೆ ಸ್ವಂತ ಅಣ್ಣನ ಹಾಗೆ ಆಗಿಬಿಟ್ಟ. ಪ್ರತಿ ಸಲ ಊರಿಗೆ ಹೋದಾಗ ಒಮ್ಮೆಯಾದರೂ ಅವರ ಮನೆಗೆ ಹೋಗಿ ಮಾತನಾಡಿಸಿ ಬರುತ್ತೇನೆ. ಅವರಿಗೂ ಖುಷಿ. ನನಗೂ ಖುಷಿ. ಅವರಿಂದ ಜೀವನದಲ್ಲಿ ಸಾಕಷ್ಟು ಕಲಿತಿದ್ದೇನೆ. ಕಲಿಯುತ್ತಲೂ ಇದ್ದೇನೆ. ಕೆಲವೊಮ್ಮೆ ಫೇಸ್ಬುಕ್ ನಿಂದ ಸಜ್ಜನರ ಪರಿಚಯವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ನಮ್ಮ ನಡುವಿನ ಬಾಂಧವ್ಯ ಮಾತ್ರ ಯಾವಾಗಲೂ ಸಿಹಿ ಸಿಹಿ.