Tuesday, 26 August 2014

"ಒಂಥರಾ ವಿಚಿತ್ರ ಅನುಭವ"

                        

ಆಗಸ್ಟ್ ೭ ರ ಸಂಜೆ ನನ್ನ ರೂಮ್ ಹತ್ತಿರ ಒಬ್ಬ ವ್ಯಕ್ತಿ ಬಂದಿದ್ದ. ಸುಮಾರು ೪೦-೪೫ ರ ಪ್ರಾಯದವನು.
ಅವನು "ನಮಸ್ಕಾರ ಸರ್. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಹತ್ತಿರ ಯಾವ್ದೋ PG ಒಂದರಲ್ಲಿ ಸಂದೀಪ ಎಂಬ ಹುಡುಗ ಇದ್ದಾನೆ. ಅವನನ್ನು ಹುಡುಕುತ್ತ ಬಂದಿದ್ದೆ. ನಿಮಗೇನಾದರೂ ಅವನ ಪರಿಚಯ ಉಂಟಾ?" ಎಂದು ನನ್ನನ್ನು ಕೇಳಿದ.

"ನನಗೆ ಗೊತ್ತಿಲ್ಲ ಸ್ವಾಮಿ. ಇಲ್ಲಿ ಹಲವಾರು PG ಗಳು ಇವೆ" ಎಂದು ನಾನು ಹೇಳಿದೆ.
ಆಗ ಅವನು "ನಾನು ಕುಂದಾಪುರದ ಹತ್ತಿರದ ಸಾಲಿಗ್ರಾಮದವನು. ಸಂದೀಪ ಇಲ್ಲೇ ಇದ್ದಾನೆ ಅಂತ ಹೇಳಿದ್ದ. ನಾನು ಆ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಕಡೆ ಇರುವ ೨-೩ PG ಗಳಲ್ಲಿ ವಿಚಾರಿಸಿದೆ. ಆದರೆ ಅಲ್ಲಿ ಆತ ಸಿಗಲಿಲ್ಲಿ. ಅಲ್ಲಿ ಕನ್ನಡ ಮಾತನಾಡುವವರು ಕಡಿಮೆ. ನೀವು ಸಿಕ್ಕಿದ್ದು ತುಂಬಾ ಸಂತೋಷವಾಯಿತು ಸರ್. ನಿಮ್ಮ ಊರು ಯಾವುದು?" ಅಂತ ಕೇಳಿದ.
 

ಆಗ ನಾನು "ನನ್ನ ಊರು ಯಾವುದಾದರೆ ನಿಮಗೇನು? ನಿಮ್ಮ ಹೆಸರು ಗಣೇಶ ಅಂತ ನನಗೆ ಗೊತ್ತು" ಎಂದೆ.
ಅದಕ್ಕೆ ಅವನು "ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯಿತು ಮಾರಾಯ್ರೇ?" ಎಂದ.
ಇದರ ನಂತರ ನಾನು ಅವನಿಗೆ ಹೇಳಿದ್ದು ಕೇಳಿ ಅವನು ಅಲ್ಲಿಂದ ಪರಾರಿಯಾದ.

೩-೪ ವರ್ಷಗಳ ಹಿಂದೆ ನಾನು ಧಾರವಾಡದ ಗಾಂಧೀನಗರದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಬಂದಿದ್ದ. ಅವನು "ಇಲ್ಲಿ ಸಂದೀಪ ಇದ್ದಾನಾ? ನಾನು ಅವನನ್ನು ಹುಡುಕುತ್ತ ಬಂದಿದ್ದೆ. ಇಲ್ಲೇ ಹತ್ತಿರದಲ್ಲಿ ಇರುವ ಈಶ್ವರ ದೇವಸ್ಥಾನದ ಹತ್ತಿರ ಅವನು ಇರುತ್ತೇನೆ ಎಂದು ಹೇಳಿದ್ದ. ನಿಮಗೆ ಗೊತ್ತುಂಟಾ? ನಾನು ಕುಂದಾಪುರದ ಹತ್ತಿರದ ಸಾಲಿಗ್ರಾಮದವನು.ನನ್ನ ಹೆಸರು ಗಣೇಶ. ವಾಪಸ್ ಹೋಗಲು ನನ್ನ ಬಳಿ ಹಣ ಇಲ್ಲ. ಸ್ವಲ್ಪ ಸಹಾಯ ಮಾಡುತ್ತೀರಾ?" ಎಂದಿದ್ದ.
ನಾನು ಹಾಗೂ ನನ್ನ ಗೆಳೆಯ ಅವನನ್ನು ಬೈದು ಓಡಿಸಿದ್ದೆವು.

ನಿನ್ನೆ ಸಿಕ್ಕಿದವನು ಅದೇ ವ್ಯಕ್ತಿ !!!!!!!!!
ನನಗೆ ಅವನ ಮುಖ ನೆನಪು ಇರಲಿಲ್ಲ. ಆದರೆ ಸಂದೀಪ, ಕುಂದಾಪುರದ ಸಾಲಿಗ್ರಾಮ ಎಂದ ತಕ್ಷಣ ನೆನಪಿಗೆ ಬಂತು ಇವನೇ ಆ ವ್ಯಕ್ತಿ ಎಂದು.

ಗೆಳೆಯರೆಲ್ಲಾ ಸಿಕ್ಕಾಪಟ್ಟೆ ನಕ್ಕಿದರು. ಅಂತು ಆ fraud ಗಣೇಶ ನಿನ್ನನ್ನು ಹುಡುಕಿಕೊಂಡು ಬೆಂಗಳೂರಿಗೂ ಬಂದ ಎಂದು.
ಹ್ಹ ಹ್ಹ ಹ್ಹ....

No comments:

Post a Comment